ಮಂಗಳೂರು : ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ತೊಕ್ಕೊಟ್ಟು ಸಮೀಪದ ಅಂಬಿಕಾರೋಡ್ನ ಗಟ್ಟಿಸಮಾಜ ಸಬಾಭವನದ ಬಳಿ ಇರುವ ಮನೆಯೊಂದು ಕುಸಿದು ಬಿದ್ದ ಘಟನೆ ಸಂಭವಿಸಿದೆ. ಅಂಬಿಕಾರೋಡ್ನ ಕಲಾವತಿ ಮೂಲ್ಯ(56)ಎಂಬವರ ಮನೆಯು ಧಾರಾಕಾರ ಮಳೆಗೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಕಲಾವತಿ ಅವರ ಪತಿ ಕಳೆದ ಎಂಟು ತಿಂಗಳ ಹಿಂದೆ ಅಕಾಲಿಕ ಮರಣ ಹೊಂದಿದ್ದರು. ಈ ಆಘಾತದಿಂದ ಕಲಾವತಿ ಅವರು ಹತ್ತನೇ ತರಗತಿ ಕಲಿಯುತ್ತಿರುವ ಮಗನೊಂದಿಗೆ ಜೀವನ ನಿರ್ವಹಣೆಗೆ ಕಷ್ಟ ಎದುರಿಸುತ್ತಿದ್ದರು. ಇದೀಗ ಅವರು ವಾಸವಾಗಿದ್ದ ಮನೆಯೂ ಕೂಡಾ ಮಳೆಯ ಕುಸಿದು ಬಿದ್ದಿದ್ದು ಅವರನ್ನು ಕಂಗಾಲಾಗಿಸಿದೆ. ಕುಲಾಲ ಸಮುದಾಯದ ಹಿರಿಯ ಮುಖಂಡ ಸೀತಾರಾಮ ಬಂಗೇರ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಬಡ ವಿಧವೆಗೆ ಸೂರು ನಿರ್ಮಿಸಲು ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.
ಕುಸಿದು ಬಿದ್ದ ವಾಸದ ಮನೆ : ಮಗನೊಂದಿಗೆ ಬಡ ವಿಧವೆ ಕಂಗಾಲು
Special Reports
1 Min Read


