ಕಾರ್ಕಳ(ಕುಲಾಲವರ್ಲ್ಡ್ ಡಾಟ್ ಕಾಮ್): ತುಳು ರಾಜ್ಯೊದ ಪೊರ್ಲೈಸಿರ ಕಾರ್ಯಕ್ರಮದ ಅಂಗವಾಗಿ ಜೈ ತುಳುನಾಡು (ರಿ) ಕುಡ್ಲ ಇವರು ಆಯೋಜಿಸಿದ ರಾಜ್ಯಮಟ್ಟದ “ತುಳು ಭಾಷೆದ ಅಸ್ತಿತ್ವ” ಕುರಿತ ತುಳು ಭಾಷಣ ಸ್ಪರ್ಧೆಯಲ್ಲಿ ಶ್ರುತಾ ಕುಲಾಲ್ ಇವರು ದ್ವಿತೀಯ ಬಹುಮಾನ ಪಡೆದಿರುತ್ತಾರೆ. ಇವರು ಜಾರ್ಕಳದ ಜಯ ಮೂಲ್ಯ ಹಾಗೂ ರತಿ ಮೂಲ್ಯ ದಂಪತಿಯ ಸುಪುತ್ರಿ. ಪ್ರಸ್ತುತ ಕ್ರೈಸ್ಟ್ ಕಿಂಗ್ ಪಿ.ಯು ಕಾಲೇಜು ಕಾರ್ಕಳ ಇಲ್ಲಿ ದ್ವಿತೀಯ ಪಿ. ಯು. ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಾರೆ.

