ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಡು ಬಡತನದ ಬೇಗೆಯಲ್ಲಿ ಬಳಲುತ್ತಿರುವ ಶಕ್ತಿನಗರದ ಬೊಲ್ಯದ ನಿವಾಸಿ ದಿವಂಗತ ತಾರಾನಾಥ ಕುಲಾಲ್ ಅವರ ಪತ್ನಿ ಶ್ರೀಮತಿ ಗಾಯತ್ರಿ ಅವರಿಗೆ ಊರ ಮಹನೀಯರು ಸೇರಿ ಮನೆ ನಿರ್ಮಿಸಿಕೊಡುವ ತೀರ್ಮಾನ ಕೈಗೊಂಡಿದ್ದು ಸಹಾಯಕ್ಕಾಗಿ ಮನವಿ ಮಾಡಿದ್ದಾರೆ.
ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ವಾಸಿಸುತ್ತಿರುವ ಗಾಯತ್ರಿ ಅವರ ಪತಿ ದೈವಾಧೀನರಾಗಿದ್ದು ಕಷ್ಟದ ಬದುಕು ಸಾಗಿಸುತ್ತಿದ್ದಾರೆ. ಗಾಯತ್ರಿ ಅವರು ಎ.ಜೆ ಆಸ್ಪತ್ರೆಯಲ್ಲಿ ದುಡಿಯುತ್ತಿದ್ದು ಆದಾಯ ತೀರಾ ಕಡಿಮೆಯಿದೆ. ಅವರ ಮನೆಯು ಶಿಥಿಲಾವಸ್ಥೆಯಲ್ಲಿದ್ದು,ಆಗಲೋ ಈಗಲೋ ಬೀಳುವ ಸ್ಥಿತಿಯಲ್ಲಿದ್ದು ಜೀವ ಭಯದಲ್ಲಿಬದುಕುತ್ತಿದ್ದಾರೆ.
ಮನೆ ನವೀಕರಿಸಲು ಅವರಳ್ಳಿ ಆರ್ಥಿಕ ಶಕ್ತಿಯಿಲ್ಲದ ಕಾರಣ ಸ್ಥಳೀಯರು ಸೇರಿ ಅವರಿಗೊಂದು ಎರಡು ಕೊಠಡಿಯ ಪುಟ್ಟ ಮನೆಯನ್ನು ನಿರ್ಮಿಸಲು ಉದ್ದೇಶಿದ್ದಾರೆ. ಅದರ ಅಂದಾಜು ವೆಚ್ಚ 2,40,000 ಆಗಿರುವ ಕಾರಣ ಸಹೃದಯಿ ದಾನಿಗಳು ಸಹಾಯ ಹಸ್ತ ನೀಡಬೇಕಾಗಿ ವಿನಂತಿಸಲಾಗಿದೆ. ಸಹಾಯಧನವನ್ನು ಗಾಯತ್ರಿ ಯವರ ಗೂಗಲ್ ಪೇ ನಂಬರಿಗೆ ನೀಡಬಹುದು.
ಗಾಯತ್ರಿ ಬಂಗೇರ ಅವರ ಗೂಗಲ್ ಪೇ ಸಂಖ್ಯೆ : 9620647125