ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಮಲ್ ಮಾರ್ಷಲ್ ಆರ್ಟ್ಸ್ ಅಕಾಡಮಿ ಇಂಡಿಯಾ ಸಂಸ್ಥೆ ವತಿಯಿಂದ ಇತ್ತೀಚೆಗೆ ಮಂಗಳೂರು ಕೆಪಿಟಿ ಆಡಿಟೋರಿಯಂ ನಲ್ಲಿ ನಡೆಸಿದ ಕರ್ನಾಟಕ-ಕೇರಳ ಓಪನ್ ಕರಾಟೆ ಚಾಂಪಿಯನ್ ಶಿಪ್ -2019 ನಲ್ಲಿ ಭಾಗವಹಿಸಿದ ಕುಲಶೇಖರ ಜ್ಯೋತಿ ನಗರದ ವಕೀಲ ರಾಮ್ ಪ್ರಸಾದ್ ಅವರ ಮಕ್ಕಾಳಾದ ಸೃಜನ್ ಪ್ರಸಾದ್ ಎರಡು ಬೆಳ್ಳಿ ಪದಕ ಹಾಗೂ ಸಾನ್ವಿ ಅವರು ಒಂದು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗಳಿಸಿದ್ದಾರೆ. ಇವರಿಬ್ಬರೂ ಮಂಗಳೂರಿನ ಕರಾಟೆ ಶಿಕ್ಷಕ ಕಮಲಾಕ್ಷ ಅವರ ಶಿಷ್ಯರಾಗಿದ್ದಾರೆ.
ಕರಾಟೆ ಚಾಂಪಿಯನ್ ಶಿಪ್ : ಪದಕ ಗೆದ್ದ ಸೃಜನ್-ಸಾನ್ವಿ
Students corner
1 Min Read


