ಮೂಡಬಿದ್ರೆ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರತಿಭಾವಂತ ಚಿತ್ರ ಕಲಾವಿದೆ ಸ್ವಾತಿ ಕುಲಾಲ್ ಕಲ್ಲಮುಂಡ್ಕೂರು ಅವರಿಗೆ `ವಿವೇಕ್ ಪುರಸ್ಕಾರ್-2019′ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜವನೆರ್ ಬೆದ್ರ ಯುವ ಸಂಘಟನೆ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ಜನವರಿ 12ರಂದು ಮೂಡಬಿದ್ರೆ ಸಮಾಜಮಂದಿರದಲ್ಲಿ ನಡೆದ `ವಿವೇಕೋತ್ಸವ’ ಸಮಾರಂಭದಲ್ಲಿ ಈ ಪುರಸ್ಕಾರ ಪ್ರದಾನ ಕಾರ್ಯಕ್ರಮ ಗಣ್ಯರ ಸಮ್ಮುಖದಲ್ಲಿ ನಡೆಯಿತು. ಸ್ವಾತಿ ಕುಲಾಲ್ ಸಹಿತ ಒಟ್ಟು ಐವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸ್ವಾತಿ ಅವರು ಮೂಡುಬಿದಿರೆ ಸಮೀಪದ ಕಲ್ಲಮುಂಡ್ಕೂರಿನ ಸೀತಾರಾಮ ಮೂಲ್ಯ ಮತ್ತು ಪದ್ಮಾವತಿ ದಂಪತಿಯ ಪುತ್ರಿಯಾಗಿದ್ದಾರೆ.
ಈ ಸುದ್ದಿಯನ್ನೂ ಓದಿರಿ :
ಪ್ರತಿಭಾವಂತ ಚಿತ್ರಕಲಾವಿದೆ ಸ್ವಾತಿ ಕುಲಾಲ್ ಕಲ್ಲಮುಂಡ್ಕೂರು
http://kulalworld.com/?p=7334



