ಒಂದು ವಿಧಾನಸೌಧ ನಾಶವಾದರೆ ಅಂತಹ ನೂರು ವಿಧಾನಸೌಧಗಳನ್ನು ಕಟ್ಟಬಹುದು. ಆದರೆ ಅವೈಜ್ಞಾನಿಕವಾಗಿ ಜೀವನದಿಯೊಂದನ್ನು ತಿರುಗಿಸಿ ಬತ್ತಿಸಿದರೆ ಆ ನದಿಗೆ ಎಂದಿಗೂ ಮರುಜೀವ ನೀಡಲು ಸಾಧ್ಯವಿಲ್ಲ ಎಂಬುದು ಇಡೀ ಜಗತ್ತು ಕಂಡುಕೊಂಡ ನಗ್ನ ಸತ್ಯ. ಜೊತೆಜೊತೆಗೆ ನದಿ ಪಾತ್ರದಲ್ಲಿಯ ಜನ ಜೀವನವೂ ನಾಶವಾಗಿ ಹೋಗುವುದರಲ್ಲಿ ಸಂದೇಹವಿಲ್ಲ. ಇಂತಹ ಪರಿಸರ ಮಾರಕ, ಕರಾವಳಿ ವಿನಾಶ ಯೋಜನೆಯನ್ನು ನದಿಮುಖಜ ಭೂಮಿಯಲ್ಲೇ ಬದುಕನ್ನು ಕಟ್ಟಿಕೊಂಡು ಬಂದಿರುವ ಕುಲಾಲ ಕುಂಬಾರ ಸಮುದಾಯ ಸಂಪೂರ್ಣವಾಗಿ ವಿರೋಧಿಸುತ್ತದೆ. ಯೋಜನೆಯ ಕಾಮಗಾರಿಯನ್ನು ತುರ್ತಾಗಿ ನಿಲ್ಲಿಸಿ, ಕಂದಾಯ ವಿಭಾಗದಿಂದ ಅಧ್ಯಯನ ನಡೆಸುವ ಬದಲಿಗೆ ಕೃಷಿ, ಪರಿಸರ, ಸಮುದ್ರ ಹಾಗೂ ನೀರಾವರಿ ತಜ್ಞರಿಂದ ನದಿ ಪಾತ್ರದ ಜನರ ಭೇಟಿ ಮಾಡಿಸಿ ಅವರ ಅವಹಾಲು ಸ್ವೀಕರಿಸಿ ಅಧ್ಯಯನ ನಡೆಸಬೇಕೆಂದು ಒತ್ತಾಯಿಸುತ್ತೇವೆ. ಈಗಾಗಲೇ ಈ ಯೋಜನೆಯ ವಿರುದ್ಧ ಹೋರಾಟದ ಮುಂಚೂಣಿಯಲ್ಲಿರುವ ಡಾ||ಎಂ. ಅಣ್ಣಯ್ಯ ಕುಲಾಲ್, ಎಂ.ಜಿ. ಹೆಗಡೆ, ಶಶಿಧರ ಶೆಟ್ಟಿ, ಯೋಗೀಶ್ ಹೊಳ್ಳ, ಡಾ|| ನಿರಂಜನ್ ರೈ, ದಿನೇಶ್ ಪೈರವರಂತಹ ನಾಯಕರ ನೇತೃತ್ವದಲ್ಲಿ ಕರಾವಳಿ ಕುಂಬಾರ ಯುವ ವೇದಿಕೆಯು ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಮಟ್ಟಗಳಲ್ಲಿ ಚಳುವಳಿಗೆ ಧುಮುಕಲಿದೆ ಎಂದು ನಾಯಕರುಗಳಾದ ತೇಜಸ್ವೀರಾಜ್, ಗಂಗಾಧರ್ ಬಂಜನ್, ಸುಜೀರ್ ಕುಡುಪು, ಹರೀಶ್ ಕಾರಿಂಜ, ಅನಿಲ್ದಾಸ್, ರಾಜೀವ್ ಕುಲಾಲ್ ಬ್ರಹ್ಮಾವರ, ಸದಾನಂದ ನಾವರ, ಜಯೇಶ್ ಗೋವಿಂದ್ ಸುರತ್ಕಲ್, ಆನಂದ ಕುಲಾಲ್ ಬಂಟ್ವಾಳ, ಪ್ರವೀಣ್ ಬಸ್ತಿ ಉಳ್ಳಾಲ, ದಿನೇಶ್ ಪಿ.ವಿ. ಪುತ್ತೂರು, ರಾಧಾಕೃಷ್ಣ ಸುಳ್ಯ, ಶ್ರೀಧರ್ ಬಂಗೇರ ತೋಕೂರು, ದಿವಾಕರ ಬಂಗೇರ ಕಾರ್ಕಳ, ನಾಗೇಶ್ ಕುಲಾಲ್ ಕಾಪು, ಬಸವರಾಜ್ ಬ್ರಹ್ಮಾವರ, ಭೋಜರಾಜ ಕುಂದಾಪುರ, ದಿನಕರ ಅಂಚನ್ ಸುರತ್ಕಲ್, ಸುಧಾಕರ ಕುಲಾಲ್ ಸುರತ್ಕಲ್, ದೇವಿಪ್ರಸಾದ್ ಮಂಗಳೂರು, ಅಶೋಕ್ ಕುಲಾಲ್ ಕೂಳೂರು ಮುಂತಾದವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಸುಜೀರ್ ಕುಡುಪು
ದ.ಕ.ಜಿಲ್ಲಾ ಅಧ್ಯಕ್ಷರು


